top of page
  • Writer's pictureA. N. Ganeshamurthy

ಕೃಷಿಯಲ್ಲಿ ಹೈಡ್ರೋಜನ್ ಪೆರಾಕ್ಸೈಡ್ ಬಳಸಲೇ ಬೇಕೇ?

ಕೃಷಿಯಲ್ಲಿ ಹೈಡ್ರೋಜನ್ ಪೆರಾಕ್ಸೈಡ್ ಬಳಸುವುದರಿಂದ ಆಗುವ ಹಾನಿಗಳು


ಎಲ್ಲ ರೈತಬಾಂಧವರಿಗೆ soulofkrishi ಇಂದ ಸ್ವಾಗತ. ನಮಸ್ಕಾರ. ಇಂದು ನಾವು ಹೈಡ್ರೋಜನ್ ಪೆರಾಕ್ಸೈಡ್ ಬಳಕೆಇಂದ ಮಣ್ಣಿನ ಸಾವಯವ ಪದಾರ್ಥಗಳು ಮತ್ತು ಮಣ್ಣಿನ ಆರೋಗ್ಯದ ಮೇಲೆ ಆಗುವ ಪರಿಣಾಮಗಳನ್ನು ಕುರಿತು ನಿಮ್ಮನ್ನು ಎಚ್ಚರಿಸಲು ಈ ಪ್ರಮುಖ ವೀಡಿಯೊಗೆ Soulofkrishi ನಿಮ್ಮನ್ನು ಸ್ವಾಗತಿಸುತ್ತೇವೆ. ಕೃಷಿ ಮತ್ತು ತೋಟಗಾರಿಕೆಯಲ್ಲಿ ಹೈಡ್ರೋಜನ್ ಪೆರಾಕ್ಸೈಡ್ ಬಳಕೆ ವೇಗವಾಗಿ, ಅತಿರೇಕವಾಗಿ ಮತ್ತು ವಿವೇಚನೆಯಿಲ್ಲದೆ ಹೆಚ್ಚುತ್ತಿದೆ. ಆದರೆ ಹೈಡ್ರೋಜನ್ ಪೆರಾಕ್ಸೈಡ್ ಬಳಕೆಯು ಮಣ್ಣಿನ ಆರೋಗ್ಯಕ್ಕೆ ಅಪಾಯಕಾರಿಯಾಗಿದೆ ಎಂದು ರೈತರಿಗೆ ತಿಳಿಸಬೇಕಿದೆ. ಜಾಹೀರಾತಿನ ಮೂಲಕ ಕೃಷಿ ಮತ್ತು ತೋಟಗಾರಿಕೆಯಲ್ಲಿ ಅದರ ಪ್ರಯೋಜನದ ಬಗ್ಗೆ ಅನೇಕ ತಪ್ಪು ಮಾಹಿತಿಗಳಿವೆ. ಗೂಗಲ್ ಹುಡುಕಾಟವು ಅದರ ಬಳಕೆಯ ಬಗ್ಗೆ ಹೆಚ್ಚು ಅನುಮಾನಾಸ್ಪದ, ಕಂಫ್ಯೂಸಿಂಗ್ ಮತ್ತು ಸಂಘರ್ಷಕರ ವೀಕ್ಷಣೆಗಳನ್ನು ನೀಡುತ್ತದೆ. ರೋಗಗಳು ಮತ್ತು ಕೀಟಗಳ ಬಗ್ಗೆ ರೈತರು ಎದುರಿಸುತ್ತಿರುವ ಎಲ್ಲಾ ದುಃಖಗಳಿಗೆ ಇದು ರಾಮಬಾಣವೆಂದು ಚಿತ್ರಿಸಲಾಗಿದೆ. ಈ ತಪ್ಪುಮಾಹಿತಿಗಳಿಂದಾಗಿ ಹತಾಶ ರೈತರನ್ನು ಅದರ ಬಳಕೆಯ ಮೊರೆಹೋಗಲು ಹತಾಶರಾಗಿದ್ದಾರೆ. ಈ ಹೇಳಿಕೆಗಳನ್ನು ಓದಿದಾಗ ನಾವು ಕೆಲವೊಮ್ಮೆ ತುಂಬಾ ಉದ್ವೇಗಗೊಳ್ಳುತ್ತೇವೆ.


ಹೀಗಿರುವಾಗ ಕೃಷಿಯಲ್ಲಿ ಹೈಡ್ರೋಜನ್ ಪೆರಾಕ್ಸೈಡ್ ಬಳಸಲೇ ಬೇಕೇ? ಎಂಬುದು ದೊಡ್ಡ ಪ್ರಶ್ನೆಯಾಗಿದೆ.

ಪೆರಾಕ್ಸೈಡ್ ಬಳಸುವಬಗ್ಗೆ ತಪ್ಪಿನ ಚಂಡಮಾರುತವೇ ಬೀರುತ್ತಿದೆ. ಇದನ್ನು ಉಪಯೋಗಿಸುವುದರಿಂದ ಕಣ್ಣಿಗೆ ಕಾಣದ ಹಾಗೆ ಆಗುತ್ತಿರುವ ಹಾನಿಯ ಎಚ್ಚರವನ್ನು ಯಾವ ಜಾಲತಾಣಗಳಲ್ಲೂ ಹೇಳುವುದಿಲ್ಲ. ಸಾಮಾಜಿಕಜಾಲತಾಣಗಳಲ್ಲಿ ಹೈಡ್ರೋಜನ್ ಪೆರಾಕ್ಸೈಡ್ ಬಳಕೆಯ ಬಗ್ಗೆ ಮಾಡಲಾದ ವಿಜ್ಞಾಪನೆಗಳು ವೈಜ್ಞಾನಿಕ ಆಧಾರಗಳು ಬೆಂಬಲಿಸುವುದಿಲ್ಲ. ಈ ವಿಜ್ಞಾಪನೆಗಳಲ್ಲಿ ಕೆಲವುಮಾತ್ರನಿಜ, ಆದರೆವ್ಯಾಪಕವಾಗಿ ಸಾಮಾನ್ಯವಾಗಿ ಎಲ್ಲವನ್ನೂ ಒಳ್ಳೆಯದೆಂದೇ ಹೇಳಲಾಗುತ್ತದೆ. ಉದಾಹರಣೆಗೆ ಹೈಡ್ರೋಜನ್ ಪೆರಾಕ್ಸೈಡ್ - ಎಲ್ಲಾರೋಗಗಳನ್ನು ಗುಣಪಡಿಸುತ್ತದೆ-ಎಲ್ಲಾ ಕೀಟಗಳನ್ನು ಕೊಲ್ಲುತ್ತದೆ - ಅನ್ನುವ ಜಾಹಿರಾತುಗಳು ಸುಳ್ಳು. ಅನೇಕ ಸಲಹೆಗಳು ಕಾಲಕಾಲಕ್ಕೆ ಪದೇಪದೇ ಪೆರಾಕ್ಸೈಡ್ ಬಳಸುವುದರಿಂದ ಆಗಬಹುದಾದ ಹಾನಿಯನ್ನು ನಿರ್ಲಕ್ಷಿಸುತ್ತವೆ. ಹೈಡ್ರೋಜನ್ ಪೆರಾಕ್ಸೈಡ್ ಮಣ್ಣಿನ ಸಾವಯವ ವಸ್ತುಗಳ ಮಾರಣಾಂತಕ ಶತ್ರುವಾಗಿದೆ. ಇದು ಮಣ್ಣಿನ ಸಾವಯವ ಪದಾರ್ಥವನ್ನು ಅತ್ಯಂತ ವೇಗವಾಗಿ ಸುಟ್ಟುಹಾಕುತ್ತದೆ ಮತ್ತು ಇದರಿಂದ ಮಣ್ಣಿನ ಆರೋಗ್ಯ ಅತಿ ವೇಗವಾಗಿ ಕ್ಷೀಣಿಸುತ್ತದೆ . ಕೆಲವು ಸಲ ಹೆಚ್ಚಿನ ಪ್ರಮಾಣದಲ್ಲಿ ಸ್ಪ್ರೇ ಮಾಡಿದರೆ ಇದುಸಸ್ಯಗಳಿಗೆ ವಿಷಕಾರಿಯಾಗಬಹುದು. ಈ ವಿಷಯ ರೈತರ ಮನದಟ್ಟಣೆಯಾಗಬೇಕು.


ಇದು ಸೂಕ್ಷ್ಮಜೀವಿಗಳನ್ನು ಕೊಲ್ಲುತ್ತದೆ, ಆದರೆ ಇದು ಒಳ್ಳೆಯ ಮತ್ತು ಕೆಟ್ಟ ಸೂಕ್ಷ್ಮಜೀವಿಗಳು ಎರಡನ್ನು ಕೊಲ್ಲುತ್ತದೆ. ಆದ್ದರಿಂದ ಕೇವಲ ವ್ಯಜ್ಞಾನಿಕ ಆಧಾರಗಳು ಧೃಡೀಕರಿಸಿದ ಸಂಧರ್ಭಗಲ್ಲಿ ಮಾತ್ರ ಇದರ ಬಳಕೆ ಮಾಡಬಹುದು.


ಈಗ ವಿಜ್ಞಾನ ಏನು ಹೇಳುತ್ತದೆ ಎಂದು ನೋಡೋಣ

ಕೃಷಿ ಮತ್ತು ತೋಟಗಾರಿಕೆಯಲ್ಲಿ ಹೈಡ್ರೋಜನ್ ಪೆರಾಕ್ಸೈಡ್ ಬಳಕೆಯನ್ನು ವೈಜ್ಞಾನಿಕ ದೃಷ್ಟಿಕೋನದಿಂದ ನೋಡಬೇಕು. ನಾವು ರೈತ ಸಮುದಾಯದ ಮುಂದೆ ಕೆಲವು ವಯ್ಜ್ನಾನಿಕ ಸತ್ಯಗಳನ್ನು ಮುಂದಿಡುತ್ತೇವೆ.

ಹೈಡ್ರೋಜನ್ ಪೆರಾಕ್ಸೈಡ್ ಎರಡು ಹೈಡ್ರೋಜನ್ ಪರಮಾಣುಗಳು ಮತ್ತು ಎರಡುಆಕ್ಸಿಜನ್ ಪರಮಾಣುಗಳನ್ನು ಹೊಂದಿರುವ ದ್ರವರೂಪದ ಕೆಮಿಕಲ್. ಇದು ಕಾರ್ಖಾನೆಗಳಲ್ಲಿ ತಯಾರಿಸಿದ ಒಂದು ಕೆಮಿಕಲ್. ಇದು ಮಳೆ ನೀರಿನಲ್ಲಿ ಅತಿ ಕಮ್ಮಿ ಪ್ರಮಾಣದಲ್ಲಿ ಇರುತ್ತದೆ. ನೋಡುವುದಕ್ಕೆ ನೀರಿಗೂ ಇದಕ್ಕೂ ಯಾವ ವೆತ್ಯಾಸವು ಕಾಣುವುದಿಲ್ಲ ಆದರೆಇದುನಾಶಕಾರಿಕೆಮಿಕಲ್ಮತ್ತುಬಹಳಅಸ್ಥಿರಕೆಮಿಕಲ್ .

ನೀರು ನೈಸರ್ಗಿಕ ದ್ರವ ಮತ್ತು ಜೀವಕ್ಕೆ ಆಧಾರ. ನೀರು ಎರಡುಹೈಡ್ರೋಜನ್ ಪರಮಾಣುಗಳು ಮತ್ತು ಒಂದು ಆಕ್ಸಿಜನ್ ಪರಮಾಣುಗಳನ್ನು ಹೊಂದಿರುವ ದ್ರವ. ನೀರು ಒಂದು ಸ್ಥಿರ ದ್ರವ.

ಹೈಡ್ರೋಜನ್ ಪೆರಾಕ್ಸೈಡ್ ಹೆಚ್ಚು ಅಸ್ಥಿರವಾಗಿರುವುದರಿಂದ ಇದರಲ್ಲಿರುವ ಒಂದು ಆಕ್ಸಿಜನ್ ಯಾವಾಗಲೂ ಹೊರಹೋಗಲು ಪ್ರಯತ್ನ ಪಡುತ್ತಿರುತ್ತದೆ. ಹಾಗೆಒಂದುಆಕ್ಸಿಜನ್ ಹೊರಹೋದಕೂಡಲೇ ಇದು ನೀರಾಗಿಹೋಗುತ್ತದೆ ಮತ್ತುಈಒಂದುಆಮ್ಲಜನಕವು ಸಿಕ್ಕ ಎಲ್ಲಾ ಸಾವಯವ ಪದಾರ್ಥಗಳನ್ನು ಸುಟ್ಟು ಹಾಕುತ್ತದೆ.

ಹಾಗಾಗಿ ಹೈಡ್ರೋಜನ್ ಪೆರಾಕ್ಸೈಡ್ಅನ್ನು ಅನೇಕ ಉದ್ದೇಶಗಳಿಗಾಗಿ ಹಲವಾರು ವಿಧಗಳಲ್ಲಿ ಬಳಸಬಹುದು. ಆದರೆ ಕೃಷಿಯಲ್ಲಿ ಇದರಬಳಕೆ ಹಾನಿಕಾರಕ.


ಇದು ಯಾವುದೇ ಸಾವಯವ ಪದಾರ್ಥಗಳನ್ನು ಸುಟ್ಟುಹಾಕುವುದರಿಂದ ಹೈಡ್ರೋಜನ್ ಪೆರಾಕ್ಸೈಡ್‌ನ್ನು ಮುಖ್ಯವಾಗಿ ಕಲುಷಿತ ನೀರು, ಮುಚ್ಚಿಹೋಗಿರುವ ನೀರಿನ ಪೈಪ್‌ಗಳಿಂದ ಸಾವಯವ ಪದಾರ್ಥಗಳನ್ನು ತೆಗೆದುಹಾಕುವುದಕ್ಕೆ ಉಪಯೋಗಿಸುತ್ತಾರೆ. ಅಡುಗೆಮನೆಯ ಸಿಂಕ್‌ಗಳು, ಬಾತ್ರೂಮ್ ಟೈಲ್ಸ್ ಮತ್ತು ಪೈಪ್‌ಗಳನ್ನು ಸ್ವಚ್ಛಗೊಳಿಸಲು, ಅಡುಗೆ ಪಾತ್ರೆಗಳು, ಡಿಶ್‌ವಾಶರ್, ಕಸದ ತೊಟ್ಟಿಗಳನ್ನು ತೊಡೆದುಹಾಕಲು, ನಿಮ್ಮ ಶೌಚಾಲಯವನ್ನು ಚನ್ನಾಗಿ ಸ್ವಚ್ಛಗೊಳಿಸಲು, ಕಲೆಗಳನ್ನು ತೆಗೆದುಹಾಕಲು ಇತ್ಯಾದಿಗಳಿಗೆ ಬಳಸಲಾಗುತ್ತದೆ. ಇದು ಮೇಣವನ್ನು ಸುಡುವುದರಿಂದ ಕಿವಿಯ ಗುಗ್ಗೆಯನ್ನ ತೆಗೆಯಲು( ಇಯರ್‌ವಾಕ್ಸ್ ) ಸಹ ಇದನ್ನು ಬಳಸಲಾಗುತ್ತದೆ. ನೆನಪಿಡಿ, ಇದು ದಹನಕಾರಿ ಮತ್ತು ನಾಶಕಾರಿ ಗುಣಗಳನ್ನು ಹೊಂದಿದೆ. ಆದ್ದರಿಂದ ಅದನ್ನು ಬಳಸುವಾಗ ಎಚ್ಚರಿಕೆಯಿಂದಿರಬೇಕು .


ಎಲ್ಲಾ ಸೂಕ್ಷ್ಮಾಣುಜೀವಿಗಳು ಸಾವಯವ ಅಣುಗಳು. ಹೈಡ್ರೋಜನ್ ಪೆರಾಕ್ಸೈಡ್ ಸಾವಯವ ಅಣುಗಳನ್ನು ಸುಡುವುದರಿಂದ ಇದು ಸೂಕ್ಷ್ಮಜೀವಿಗಳನ್ನು ಕೊಲ್ಲುತ್ತದೆ. ಇದು ಸತ್ಯ. ಹೈಡ್ರೋಜನ್ ಪೆರಾಕ್ಸೈಡ್ ಯೀಸ್ಟ್, ಶಿಲೀಂಧ್ರಗಳು, ಬ್ಯಾಕ್ಟೀರಿಯಾಗಳು, ವೈರಸ್ಗಳನ್ನು ಕೊಲ್ಲುತ್ತದೆ ಎಂದು ಹೇಳಲಾಗುತ್ತದೆ. ದುರದೃಷ್ಟವಶಾತ್, ಇದರ ಜೂತೆಗೆ ಒಳ್ಳೆಯ ಸೂಕ್ಷ್ಮಾಣುಜೀವಿಗಳು ಕೂಡ ಸಾಯುತ್ತವೆ. ಹೈಡ್ರೋಜನ್ ಪೆರಾಕ್ಸೈಡ್ ಸೂಕ್ಷ್ಮಜೀವಿಗಳನ್ನು ಕೊಲ್ಲುತ್ತದೆ ಎಂಬ ಸುಳಿವನ್ನು ಪಡೆದುಕೊಂಡು ಕೃಷಿಕ್ಷೇತ್ರದಲ್ಲಿ ಕುತೂಹಲಕಾರಿಇಂದ ಹೈಡ್ರೋಜನ್ ಪೆರಾಕ್ಸೈಡ್, H2O2 ಅನ್ನು ಕೃಷಿ ಮತ್ತು ಪಶುಸಂಗೋಪನೆಯಲ್ಲಿ ವಿವಿಧ ರೀತಿಯಲ್ಲಿ ಬಳಸಲು ಅತಿ ವೇಗವಾಗಿ ಶುರುವಾಗಿದೆ. ಹಾಗಾಗಿ ಉದ್ಯಮಿಗಳು ಹೆಚ್ಚು ಸಕ್ರಿಯವಾಗಿ ಹೈಡ್ರೋಜನ್ ಪೆರಾಕ್ಸೈಡ್ ಅನ್ನು ಹೊಂದಿರುವ ಹಲವಾರು ಉತ್ಪನ್ನಗಳೊಂದಿಗೆ ವಿವಿಧ ಬ್ರ್ಯಾಂಡ್ ಹೆಸರುಗಳಲ್ಲಿ ಮಾರಾಟಕ್ಕೆ ತಂದಿದ್ದಾರೆ. ಆಶ್ಚರ್ಯವೆಂದರೆ ಈ ಯಾವ ಉಪಯೋಗದ ಲಾಭಗಳನ್ನು ಪ್ರಾಯೋಗಿಕವಾಗಿ ಸಾಬೀತುಪಡಿಸಲಾಗಿದೆಯೇ ಅಥವಾ ಇಲ್ಲವೇ ಎಂದು ಪರಿಗಣಿಸಲಿಲ್ಲ.


ಸಸ್ಯ ರೋಗಕಾರಕಗಳ ವಿರುದ್ಧ ಹೋರಾಡಲು ಮತ್ತು ಬೆಳೆ ಇಳುವರಿಯನ್ನು ಸುಧಾರಿಸಲು ಇದು ಸಹಾಯ ಮಾಡುತ್ತದೆ ಎಂದು ತಿಳಿದು ರೈತರು ಹೆಚ್ಚು ಹೆಚ್ಚಾಗಿ ಇದರ ಬಳಕೆ ಮಾಡಲು ಶುರುವಾಗಿದೆ.


ಮತ್ತೊಂದೆಡೆ ಮಾರಾಟಮಾಡುವವರು ಇದು ರೈತ ಮಿತ್ರ , ರೈತರ ಪಾಲಿಗೆ ಇದು ವರದಾನ ಎಂದು ಜಾಹಿರಾತುಗಳ ಮೂಲಕ ತಿಳಿಸಿ ಹೆಚ್ಚು ಮಾರಾಟ ಮಾಡಲು ಶುರುವಾಗಿದೆ. ಜಾಹಿರಾತುಗಲ್ಲಿ ಇದು ನೈಸರ್ಗಿಕ ಮತ್ತು ಸಾವಯವ ಪದಾರ್ಥ ಮತ್ತು ಬೆಳೆಗಳುಅಥವಾಜಾನುವಾರುಗಳ ಬೆಳವಣಿಗೆಯ ಮೇಲೆ ಪರಿಣಾಮ ಬೀರುವ ಯಾವುದೇ ರಾಸಾಯನಿಕಗಳು ಅಥವಾ ಇತರ ಸೇರ್ಪಡೆಗಳನ್ನು ಹೊಂದಿಲ್ಲ" ಎಂದು ಅವರು ಹೇಳುತ್ತಿದ್ದಾರೆ. ಆದರೆ ವಾಸ್ತವವಾಗಿ ಇದು ಒಂದು ಕೈಗಾರಿಕಾ ಉತ್ಪಾದನೆಯ ರಾಸಾಯನಿಕವಾಗಿದೆ. ಮಾರುಕಟ್ಟೆಯು ಇಂದು ಕೃಷಿ-ದರ್ಜೆಯ ಹೈಡ್ರೋಜನ್ ಪೆರಾಕ್ಸೈಡ್ ಲೇಬಲ್‌ನೊಂದಿಗೆ ಉತ್ಪನ್ನಗಳಿಂದ ತುಂಬಿದೆ.


ಹಾಗಾದರೆ ನಿಜ ಯಾವುದು ಎಂದು ರೈತರು ತಿಳಿಯಬೇಕು.

ನಿಜವಾದ ಸಮಸ್ಯೆ ಇಲ್ಲಿಂದ ಪ್ರಾರಂಭವಾಗುತ್ತದೆ.

ಹೈಡ್ರೋಜನ್ ಪೆರಾಕ್ಸೈಡ್ ಕೇವಲ ರೋಗಕಾರಕಗಳನ್ನು ಕೊಂದು ರೋಗಗಳನ್ನು ನಿಯಂತ್ರಿಸಿದರೆ ಅದು ತುಂಬಾ ಒಳ್ಳೆಯದು. ಆದರೆ ಇದು ಸಿಕ್ಕ ಎಲ್ಲಾ ಸಾವಯವ ಪದಾರ್ಥವನ್ನು ಸುಟ್ಟುಹಾಕುತ್ತದೆ ಮತ್ತು ರೋಗಕಾಡುವ ಸೂಕ್ಷ್ಮ ಜೀವಿಗಳು ಸೇರಿದಂತೆ ಯಾವುದೇ ಸಾವಯವ ಪದಾರ್ಥಗಳೊಂದಿಗೆ ಹೈಡ್ರೋಜನ್ ಪೆರಾಕ್ಸೈಡ್ನ ಪ್ರತಿಕ್ರಿಯೆಯಿಂದಾಗಿ ಮಣ್ಣಿನ ಸಾವಯವ ಪದಾರ್ಥವು ಸುಟ್ಟುಹೋಗುತ್ತವೆ.


ರೈತರು ಹೈಡ್ರೋಜನ್ ಪೆರಾಕ್ಸೈಡ್ ಅನ್ನು ಯಾವಯಾವರೀತಿಯಲ್ಲಿ ಬಳಸುತ್ತಿದ್ದಾರೆ ಎಂದು ನೋಡೋಣ

ಹೈಡ್ರೋಜನ್ ಪೆರಾಕ್ಸೈಡ್ ಅನ್ನು ಸಾಮಾನ್ಯವಾಗಿ ಎಲೆಗಳ ಸಿಂಪಡಣೆ ಅಥವಾ ಮಣ್ಣಿನ ಡ್ರೇನ್ಚಿಂಗ್ ಅಂದರೆ ತೇವಗೊಳಿಸಲು ಅಥವಾಡ್ರಿಪ್ಪೈಪ್‌ಗಳ ಮೂಲಕ ಬಳಸುತ್ತಿದ್ದಾರೆ .

ಹೈಡ್ರೋಜನ್ ಪೆರಾಕ್ಸೈಡ್ ಅನ್ನು ಡ್ರೇನ್ಚಿಂಗ್ ಮಾಡಿದಾಗ ಅಥವಾ ಸಸ್ಯಗಳ ಮೇಲೆ ಸಿಂಪಡಿಸಿದಾಗ ತಕ್ಷಣವೇ ಸಾವಯವ ಪದಾರ್ಥಗಳೊಂದಿಗೆ ಸಂಪರ್ಕಕ್ಕೆ ಬರುತ್ತದೆ. ತಕ್ಷಣವೇ ಹೈಡ್ರೋಜನ್ ಪೆರಾಕ್ಸೈಡ್‌ನಲ್ಲಿರುವ ಆಮ್ಲಜನಕವು ಅದರಿಂದ ಹೊರಬರುತ್ತದೆ ಮತ್ತು ಸಾವಯವ ಪದಾರ್ಥವನ್ನು ಸುಡುತ್ತದೆ. ಉಳಿಯುವುದು ಇಂಗಾಲದ ಡೈಆಕ್ಸೈಡ್ ಮತ್ತು ನೀರು ಹೊರಬರುತ್ತವೆ .

ನಾವು ಮಣ್ಣನ್ನು ಡ್ರೇನ್ಚಿಂಗ್ ಮೂಲಕ ತೇವಗೊಳಿಸಿದಾಗ ಎಲ್ಲಾ ಹೈಡ್ರೋಜನ್ ಪೆರಾಕ್ಸೈಡ್ ಮಣ್ಣಿನ ಸಾವಯವ ಪದಾರ್ಥಗಳೊಂದಿಗೆ ಸಂಪರ್ಕಕ್ಕೆ ಬರುತ್ತದೆ. ಇದನ್ನು ಸಿಂಪಡಿಸಿದಾಗ 0.1% ಗಿಂತ ಕಡಿಮೆಹೈಡ್ರೋಜನ್ ಪೆರಾಕ್ಸೈಡ್ ಗುರಿಪಡಿಸಿದ ಕೀಟಗಳನ್ನು ತಲುಪುತ್ತದೆ ಮತ್ತು 10% ಗಿಂತ ಕಡಿಮೆ ಸಸ್ಯದ ಮೇಲೆ ಉಳಿಯುತ್ತದೆ. ಉಳಿದ 90% ಕೆಳಗೆ ಮಣ್ಣಿನಮೇಲೆ ಬೀಳುತ್ತದೆ. ಇದು ಮತ್ತೊಮ್ಮೆ ಮಣ್ಣಿನಲ್ಲಿರುವ ಸಾವಯವ ವಸ್ತುಗಳನ್ನು ಸುಟ್ಟುಹಾಕುತ್ತದೆ.

ಈಗ ಹೈಡ್ರೋಜನ್ ಪೆರಾಕ್ಸೈಡ್ ಬಳಕೆಯಿಂದ ಸಾವಯವ ಪದಾರ್ಥಗಳು ಎಷ್ಟು ನಷ್ಟವಾಗುತ್ತವೆ ಎಂದು ನೋಡೋಣ.


ಪ್ರಪಂಚದಾದ್ಯಂತದ ಮಣ್ಣು ಪರೀಕ್ಷಾ ಪ್ರಯೋಗಾಲಯಗಳಲ್ಲಿ, ಹೈಡ್ರೋಜನ್ ಪೆರಾಕ್ಸೈಡ್ ಅನ್ನು ಬಳಸಿಕೊಂಡು ಸಾವಯವ ಪದಾರ್ಥವನ್ನು ಸುಡುವ ಮೂಲಕ ಆರ್ಗಾನಿಕ್ ಮ್ಯಾಟರ್ ಅಂದಾಜು ಮಾಡಲು ಬಳಸಲಾಗುತ್ತದೆ. ಇಲ್ಲಿ ಮಣ್ಣನ್ನು ಕಾನ್ಸನ್ಟ್ರೇಟೆಡ್ ಹೈಡ್ರೋಜನ್ ಪೆರಾಕ್ಸೈಡ್‌ನ ಬಳಸಲಾಗುತ್ತದೆ .(ಸುಮಾರು 15%).


ಕೃಷಿಯಲ್ಲಿ ನಾವು 3-10% ಬಳಸುತ್ತೇವೆ. ಬಳಸಿದ ಪ್ರಮಾಣವೂ ಕಡಿಮೆ. ಆದರೆ ಹೈಡ್ರೋಜನ್ ಪೆರಾಕ್ಸೈಡ್‌ನ ನಿರಂತರ ಬಳಕೆಇಂದ ಇದುಮಣ್ಣುಪರೀಕ್ಷಾಪ್ರಯೋಗಾಲಯದಲ್ಲಿ ಬಳಸುವ ರೀತಿಯನ್ನೇ ಹೋಲುವ ಸ್ಥಿತಿಯನ್ನು ಸೃಷ್ಟಿಸುತ್ತದೆ ಮತ್ತು ಸಾವಯವ ಪದಾರ್ಥಗಳು ನಿರಂತರವಾಗಿ ಸುಟ್ಟುಹೋಗುತ್ತದೆ ಮತ್ತು ಕಾರ್ಬನ್ ಡೈಆಕ್ಸೈಡ್ ರೂಪದಲ್ಲಿ ಮಣ್ಣಿನಿಂದ ಹೊರ ಹೋಗುತ್ತವೆ ಮತ್ತು ಮಣ್ಣಿನ ಆರೋಗ್ಯವು ಹದಗೆಡುತ್ತದೆ. ನಾವು ಹೈಡ್ರೋಜನ್ ಪೆರಾಕ್ಸೈಡ್ನೊಂದಿಗೆ ಮಣ್ಣನ್ನು ಸಂಸ್ಕರಿಸಿದಾಗ ಎಷ್ಟು ಸಾವಯವ ಪದಾರ್ಥಗಳು ಕಳೆದುಹೋಗಿವೆ ಎಂಬುದನ್ನು ಈ ಟೇಬಲ್ ನಲ್ಲಿ ನೋಡಬಹುದು. ಈ ಮೂಲಕ ಸತತವಾಗಿ ಬಳಸುವುದರಿಂದ ಕ್ರಮೇಣವಾಗಿ ಸುಮಾರು 50ರಿಂದ 62% ಸಾವಯವ ಪದಾರ್ಥಗಳು ಮಣ್ಣಿನಲ್ಲಿ ನಾಶವಾಗಿ ಹೋಗುತ್ತದೆ.


ಹೈಡ್ರೋಜನ್ ಪೆರಾಕ್ಸೈಡ್ನಿಂದ ವಿವಿಧ ರೀತಿಯ ಮಣ್ಣಿನಲ್ಲಿ ಆರ್ಗಾನಿಕ್ ಮ್ಯಾಟರ್ ನಾಶವಾಗುವ ಪ್ರಮಾಣ



ಸಾಮಾನ್ಯವಾಗಿ ಕೃಷಿದರ್ಜೆಯಹೈಡ್ರೋಜನ್ ಪೆರಾಕ್ಸೈಡ್ 3-10% ಇರುತ್ತವೆ. ಆದರೆ ಪ್ರತಿ ಸ್ಪ್ರೇ ಅಥವಾ ಮಣ್ಣಿನ ಡ್ರೆನ್ಚಿಂಗ್ಗೆ ಗೆ ಬಳಸುವ ಪ್ರಮಾಣವು ತುಂಬಾ ಹೆಚ್ಚು. ಉದಾಹರಣೆಗೆ 800-900ml 3%H2O2 ಅನ್ನು ಪ್ರತಿ ಹೆಕ್ಟೇರಿಗೆ 250 ಲೀಟರ್‌ಗಳಲ್ಲಿ ಬಳಸಲಾಗುತ್ತದೆ.


ನಾವು ಇಲ್ಲಿ ಜಾಗರೂಕರಾಗಿರಬೇಕು ಏಕೆಂದರೆ ರೈತರು ಅದನ್ನು ಬಳಸಲು ಪ್ರಾರಂಭಿಸಿದಾಗ ಅವರು ಬಳಸುವುದನ್ನು ನಿರ್ಲಕ್ಷವಾಗಿ ಮುಂದುವರೆಸುತ್ತಾರೆ ಮತ್ತು ವಿವೇಚನಾರಹಿತ ಅಪ್ಲಿಕೇಶನ್ ಅನ್ನು ಪ್ರಾರಂಭಿಸುತ್ತಾರೆ. ಹೈಡ್ರೋಜನ್ ಪೆರಾಕ್ಸೈಡ್ ಮಣ್ಣಿನೊಂದಿಗೆ ಸಂಪರ್ಕಕ್ಕೆ ಬಂದಾಗ ಅದು ಹೆಚ್ಚಾಗಿ ಹ್ಯೂಮಸ್ ಭಾಗವನ್ನೇ ಸುಡುತ್ತದೆ ಮತ್ತು ಕೋಳಿಯದೆ ಉಳಿದಿರುವ ಸಾವಯವ ಪದಾರ್ಥಗಳು ಉಳಿಯುತ್ತವೆ. ಆದ್ದರಿಂದ ಈ ರೀತಿ ಹೈಡ್ರೋಜನ್ ಪೆರಾಕ್ಸೈಡ್ ಅನ್ನು ನಿರಂತರವಾಗಿ ಬಳಸುವುದರಿಂದ ಮಣ್ಣಿನ ಸಾವಯವ ಪದಾರ್ಥದ ಹೆಚ್ಚಿನ ಭಾಗವು ಕೆಲವೇ ದಿನಗಳಲ್ಲಿ ತ್ವರಿತವಾಗಿಸುಟ್ಟು ನಾಶವಾಗುತ್ತದೆ. ಈರೀತಿ ಮಣ್ಣಿನ ಸ್ಥಿರ ಸಾವಯವ ಪದಾರ್ಥವು ಕಳೆದು ಮಣ್ಣಿನ ರಚನೆ ಮತ್ತು ಆರೋಗ್ಯದ ತ್ವರಿತ ಕ್ಷೀಣತೆಗೆ ಕಾರಣವಾಗುತ್ತದೆ. ಹೈಡ್ರೋಜನ್ ಪೆರಾಕ್ಸೈಡ್ ಸಾವಯವಪದಾರ್ಥವನ್ನು ಎರಡು ಹಂತದಲ್ಲಿ ಸುಡುತ್ತದೆ. ಮೊದಲ ಹಂತದಲ್ಲಿ, ಕಾರ್ಬನ್ ಮತ್ತು ನೈಟ್ರೋಜನ್ ಹೊಂದಿರುವ ವಸ್ತುವು ಸುಡುತ್ತದೆ , ಆದರೆ ಎರಡನೇ ಹಂತದಲ್ಲಿ ಬರಿ ಕಾರ್ಬನ್ ಇರುವ ವಸ್ತುಗಳನ್ನು ಸುಡುತ್ತದೆ. ಹೀಗಾಗಿ ಮೊದಲನೇ ಹಂತದಲ್ಲೇ ಕಾರ್ಬನ್ ಜೊತೆಗೆ ನೈಟ್ರೋಜನ್ ಕೂಡ ಮಣ್ಣಿನಿಂದ ಹೊರಹೋಗುತ್ತದೆ. ಆದ್ದರಿಂದ ಹೈಡ್ರೋಜನ್ ಪೆರಾಕ್ಸೈಡ್ ಅನ್ನು ಡ್ರೇನ್ಚಿಂಗ್ ಮಾಡಲು ಅಥವಾ ಎಲೆಗಳ ಸಿಂಪಡಣೆಯಾಗಿ ನಿರಂತರವಾಗಿ ಬಳಸುವುದು ಮಣ್ಣಿನ ಸಾವಯವ ವಸ್ತುಗಳಿಗೆ, ಮಣ್ಣಿನಲ್ಲಿರುವ ನೈಟ್ರೋಜನ್ಗೆ ಮತ್ತು ಮಣ್ಣಿನ ಆರೋಗ್ಯಕ್ಕೆ ಹಾನಿಕಾರಕವಾಗಿದೆ.

ರೈತರಿಗೆ ಗೊತ್ತಿರುವಂತೆ ಮಣ್ಣಿನಲ್ಲಿನ ಅತ್ಯಂತ ಉಪಯುಕ್ತವಾದ ಶಿಲೀಂಧ್ರ ಅಂದರೆ ಮೈಕೋರೈಜಾ. ಈಮೈಕೋರೈಜಾ ವನ್ನು ಪೆರಾಕ್ಸೈಡ್ ಬೇಗ ಸುಟ್ಟುಹಾಕುತ್ತದೆ. ಮೈಕೋರೈಜಾ ಮಣ್ಣಿನಲ್ಲಿ ಬೇರಿನಜಾಲ ಹೊಂದಿರುತ್ತದೆ. ಪೆರಾಕ್ಸೈಡ್ ನಿಂದ ಈ ಬೇರಿನಜಾಲ ಮತ್ತು ಹೈಫೆ ಎರಡೂ ಸಾಯುತ್ತವೆ. ಆದ್ದರಿಂದ ಪೆರಾಕ್ಸೈಡ್ ಬಳಕೆಯು ಸಸ್ಯಗಳೊಂದಿಗೆ ವಿಶೇಷವಾಗಿ ದೀರ್ಘಕಾಲಿಕ ಬೆಳೆಗಳಾದ ಹಣ್ಣು ಮತ್ತು ತೋಟದ ಬೆಳೆಗಳೊಂದಿಗೆ ಉತ್ತಮವಾಗಿ ಸ್ಥಾಪಿತವಾದ ಮೈಕೋರೈಜಾ ಸಂಬಂಧದ ಉಳಿವಿಗೆ ತುಂಬಾ ಅಪಾಯಕಾರಿಯಾಗಿದೆ. ಒಮ್ಮೆ ಮೈಕೊರೈಜಾವನ್ನು ಕೊಂದರೆ ಅದು ಮಣ್ಣಿನ ರಚನೆಯನ್ನು ಕೂಡ ನಾಶಪಡಿಸುತ್ತದೆ ಏಕೆಂದರೆ ಇದು ಗ್ಲೋಮಾಲಿನ್ ಅಂದರೆ ಮಣ್ಣನ್ನು ಹಿಡಿದಿಡುವ ವಸ್ತುವನ್ನು ಮತ್ತುಸಸ್ಯಪೋಷಕಾಂಶಗಳನ್ನು ಪಡೆಯಲು ಬಳಸುವ ಬೇರಿನ ಜಾಲವನ್ನು ಹಾನಿಗೊಳಿಸುತ್ತದೆ.


ವೈಜ್ಞಾನಿಕ ಆಧಾರವಿಲ್ಲದೆ ಕೃಷಿಯಲ್ಲಿ ಪೆರಾಕ್ಸೈಡ್‌ನ ಪ್ರಯೋಜನಗಳ ಬೃಹತ್ ಲೇಬಲ್ ಕ್ಲೇಮ್ ಮಾಡಲಾಗುತ್ತದೆ

•ಸಸ್ಯಗಳನ್ನು ಫಲವತ್ತಾಗಿಸುತ್ತದೆ

•ನೀರುತುಂಬಿದಮಣ್ಣಿನಿಂದ ಉಂಟಾಗುವ ಬೇರು ಕೊಳೆತವನ್ನು ಗುಣಪಡಿಸುತ್ತದೆ

•ಬೇರಿನಬೆಳವಣಿಗೆಯನ್ನು ಹೆಚ್ಚಿಸುತ್ತದೆ

•ಕೀಟಗಳನ್ನು ಹಿಮ್ಮೆಟ್ಟಿಸುತ್ತದೆ

•ಕಳೆಗಳನ್ನು ಕೊಲ್ಲುತ್ತದೆ

•ಶಿಲೀಂಧ್ರ ರೋಗಗಳ ವಿರುದ್ಧ ಹೋರಾಡುತ್ತದೆ

•ನರ್ಸರಿ ಮಾಧ್ಯಮವನ್ನು ಸೋಂಕುರಹಿತಗೊಳಿಸುತ್ತದೆ

•ಬೀಜಗಳನ್ನು ಸ್ಯಾನಿಟೈಸ್ ಮಾಡುತ್ತದೆ

•ಬೀಜಮೊಳಕೆಯೊಡೆಯುವುದನ್ನು ವೇಗಗೊಳಿಸುತ್ತದೆ

•ನೀರನ್ನುಸಂಸ್ಕರಿಸುತ್ತದೆ

ಇತ್ಯಾದಿ


ಈಗ ನಾವು ಕೆಲವು ಮೂಲಭೂತ ಅಂಶಗಳನ್ನು ಪರಿಶೀಲಿಸೋಣ

ಹೈಡ್ರೋಜನ್ ಪೆರಾಕ್ಸೈಡ್ ಮಣ್ಣನ್ನು ಗಾಳಿಆಡುವಂತೆ ಮಾಡುತ್ತದೆ ಎಂದು ಹೇಳಲಾಗುತ್ತದೆ.

ಬೇರುಗಳಿಗೆ ಚನ್ನಾಗಿ ಗಾಳಿಯಾಡಿದರೆ ಬೆಳೆಗಳಿಗೆ ವೊಳ್ಳೆಯದು ಎಂದು ಎಲ್ಲರಿಗು ಗೊತ್ತಿರುವ ವಿಷಯ. ಆದರೆಪೆರಾಕ್ಸೈಡ್ ನಿಂದ ಹೊರಬರುವ ಆಕ್ಸಿಜನ್ ಮಣ್ಣಿನಲ್ಲಿ ಗಾಳಿಯಾಡುವಂತೆ ಮಾಡುತ್ತದೆ ಎನ್ನುವುದು ಸುಳ್ಳು. ಏಕೆಂದರೆ ಪೆರಾಕ್ಸೈಡ್ ನಿಂದ ಹೊರಬರುವ ಆಕ್ಸಿಜನ್ ಕೂಡಲೇ ಸಾವಯವ ಪದಾರ್ಥವನ್ನು ಸುಡಲು ಬಳಸಿಹೋಗುತ್ತದೆ ಮತ್ತು ಗಾಳಿಯಾಡಲು ಈ ಆಕ್ಸಿಜನ್ ಲಭ್ಯವೇ ಇರುವುದಿಲ್ಲ. ಹೈಡ್ರೋಜನ್ ಪೆರಾಕ್ಸೈಡ್ ಮಾರಾಟಗಾರರು ಪೆರಾಕ್ಸೈಡ್ ನಿಂದ ಬರುವ ಆಕ್ಸಿಜನ್ ಮಣ್ಣಿನಲ್ಲಿ ನೀರಿನಿಂದ ತುಂಬಿರುವ ಮಣ್ಣಿನ ರಂಧ್ರಗಳನ್ನು ತೆರೆಯುವಂತ್ತೆ ಮಾಡಿ ಗಾಳಿಯಾಡಲು ಅನುಕೂಲ ಮಾಡುತ್ತದೆ ಎಂದು ವಾದ ಮಾಡುತ್ತಾರೆ. ಇದನ್ನು ಹೃದಯದ ಆಪರೇಷನ್ ಏಂಜಿಯೋಪ್ಲಾಸ್ಟಿ ಅಥವಾ ಸ್ಟೆಂಟ್ ಹಾಕುವುದಕ್ಕೆ ಹೋಲಿಸಿ ಹೇಳುತ್ತಾರೆ.


ಇದು ಸಾಧ್ಯವಿಲ್ಲ. ಪೆರಾಕ್ಸೈಡ್ ಸಾವಯವ ಪದಾರ್ಥಗಳೊಂದಿಗೆ ಸಂಪರ್ಕಕ್ಕೆ ಬಂದಾಗ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ. ಆದರೆ ಮಣ್ಣಿನ ರಂಧ್ರಗಳನ್ನು ತೆರೆಯಲು ಹೆಚ್ಚಿನ ಒತ್ತಡದ ಅಗತ್ಯವಿದೆ. ಹೈಡ್ರೋಜನ್ ಪೆರಾಕ್ಸೈಡ್‌ನಿಂದ ಬಿಡುಗಡೆಯಾದ ಆಮ್ಲಜನಕವು ಸಾವಯವ ಪದಾರ್ಥ ವನ್ನು ಸುಟ್ಟು ಕಾರ್ಬನ್ದ್ಯ್ಆಕ್ಸಿಡ್ ಆಗಿ ನೀರಿನಜೋತೆ ಸೇರಿಹೋಗುತ್ತದೆ. ಆದ್ದರಿಂದ ಆಕ್ಸಿಜನ್ ಈಕಾರ್ಯಕ್ಕೆ ಉಳಿಯುವುದೇ ಇಲ್ಲ ಮತ್ತು ಮಣ್ಣಿನ ರಂಧ್ರಗಳನ್ನು ತೆರೆಯಲು ಬೇಕಾದ ವೊತ್ತಡ ಖಂಡಿತ ಇರುವುದಿಲ್ಲ. ವಾಸ್ತವವಾಗಿ ಪೆರಾಕ್ಸೈಡ್ ಮಣ್ಣಿನೊಂದಿಗೆ ಪ್ರತಿಕ್ರಿಯಿಸಿದಾಗ ಅದು ಮಣ್ಣಿನ ಸಾವಯವ ಪದಾರ್ಥವನ್ನು ಬಹಳ ವೇಗವಾಗಿ ನಾಶಪಡಿಸುತ್ತದೆ, ಅದು ಕೆಲವು ನಿಮಿಷಗಳಲ್ಲಿ ಮಣ್ಣನ್ನು ಮತ್ತಷ್ಟು ಕಾಂಪ್ಯಾಕ್ಟ್ ಆಗುವುದಕ್ಕೆ ಕಾರಣವಾಗುತ್ತದೆ. ಆದ್ದರಿಂದ ಇದು ಮಣ್ಣನ್ನು ಗಾಳಿಆಡುವಂತೆ ಮಾಡುತ್ತದೆ ಎಂಬ ವಾದವು ಅವೈಜ್ಞಾನಿಕ ಮತ್ತು ಕೇವಲ ಪುರಾಣವಾಗಿದೆ.


ಹೈಡ್ರೋಜನ್ ಪೆರಾಕ್ಸೈಡ್ ಮಣ್ಣಿಂದ ಹರಡುವರೋಗಗಳನ್ನು ನಿಯಂತ್ರಣ ಮಾಡುತ್ತದೆ ಎಂದು ಹೇಳಲಾಗುತ್ತದೆ:

ಹೈಡ್ರೋಜನ್ ಪೆರಾಕ್ಸೈಡ್ನೊಂದಿಗೆ ಸಂಪರ್ಕಕ್ಕೆ ಬಂದಾಗ ಮಣ್ಣಿನ ರೋಗಕಾರಕವು ಸಾಯುತ್ತದೆ. ಇದು ನಿಜ. ಆದರೆ ಅದಕ್ಕಿಂತ ಹೆಚ್ಚಾಗಿ ಎಲ್ಲಾ ಹೆಚ್ಚು ಪ್ರಯೋಜನಕಾರಿ ಸೂಕ್ಷ್ಮಾಣುಜೀವಿಗಳು ಸಹ ರೋಗಕಾರಕಗಳೊಂದಿಗೆ ಸಾಯುತ್ತವೆ. ಹೈಡ್ರೋಜನ್ ಪೆರಾಕ್ಸೈಡ್ ಪ್ರವರ್ತಕರು ಇದು ಮಣ್ಣನ್ನು ಸೋಂಕುರಹಿತಗೊಳಿಸುತ್ತದೆ ಎಂದು ವಾದಿಸುತ್ತಾರೆ. ಮಣ್ಣನ್ನು ಸೋಂಕುರಹಿತಗೊಳಿಸುವುದು ಅಸಾಧ್ಯವೆಂದು ನೆನಪಿಡಿ. ಇದು ಮೇಲ್ಮೈ ಸ್ಯಾನಿಟೈಸರ್ ಆಗಿದೆ ಮತ್ತು ರೋಗಕಾರಕಗಳು ಮಣ್ಣಿನಲ್ಲಿ ಬೆಳೆಯುವ ಮತ್ತು ಮುಲ್ಟಿಪ್ಲ್ಯ್ ಆಗುವ ಸ್ಥಳಗಳಿಗೆ ಆಳವಾಗಿ ತಲಪುವುದಿಲ್ಲ. ಆದ್ದರಿಂದ ದೊಡ್ಡ ಪ್ರಮಾಣದಲ್ಲಿ ಅನ್ವಯಿಸದ ಹೊರತು ಡ್ರೇನ್ಚಿಂಗ್ ಎಂದಿಗೂ ಪರಿಣಾಮಕಾರಿಯಾಗಿರುವುದಿಲ್ಲ. ಹಾಗೆ ಮಾಡಿದರೆ ಮಣ್ಣಿನ ಸಾವಯವ ಪದಾರ್ಥ ಕಳೆದು ಮಣ್ಣು ಬಂಜರ್ ಆಗುತ್ತದೆ.

ಹೈಡ್ರೋಜನ್ ಪೆರಾಕ್ಸೈಡ್ ರೋಗಪೀಡಿತ ಮತ್ತು ಹಾನಿಗೊಳಗಾದ ಬೆಳೆಗಳನ್ನು ಗುಣಪಡಿಸುತ್ತದೆ ಎಂದು ಪೆರಾಕ್ಸೈಡ್ ಪ್ರವರ್ತಕರು ಹೇಳುತ್ತಾರೆ.


ಇದು ಭಾಗಶಃ ಸತ್ಯ. ಹೌದು, ಹೈಡ್ರೋಜನ್ ಪೆರಾಕ್ಸೈಡ್‌ನೊಂದಿಗೆ ಸಂಪರ್ಕಕ್ಕೆ ಬರುವ ಎಲೆಯ ಮೇಲ್ಮೈಯಲ್ಲಿರುವ ಸಸ್ಯ ರೋಗಕಾರಕಗಳು ಸಾಯುತ್ತವೆ ಮತ್ತು ಬೆಳವಣಿಗೆಯ ಆರಂಭಿಕ ಹಂತಗಳಲ್ಲಿ ಬಹಳ ಕಡಿಮೆ ಅವಧಿಯಲ್ಲಿ ರೋಗವನ್ನು ನಿಭಾಯಿಸಲು ಸಹಾಯ ಮಾಡಬಹುದು ಎಂಬುದು ನಿಜ. ಇದನ್ನೇ ಮುಂದಾಗಿಸಿ ಫಂಗಲ್ರೋಗಗಳನ್ನು ಕಡಿಮೆ ಮಾಡಲು ರೈತರು ಈಗ ಬೆಳೆಗಳ ಮೇಲೆ ಸಿಂಪಡಈಸಲು ಪ್ರಾರಂಭಿಸಿದ್ದಾರೆ. ಇದು ಮೇಲ್ಮೈಯಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ ಮತ್ತು ಸಿಸ್ಟೆಮಿಕ್ ಶಿಲೀಂಧ್ರನಾಶಕದಂತೆ ಕೆಲಸ ಮಾಡುವುದಿಲ್ಲ. ಹಾಗಾಗಿ ರೋಗದ ಪರಿಣಾಮಕಾರಿ ನಿರ್ವಹಣೆಯಲ್ಲಿ ಇದು ಯಶಸ್ವಿಯಾಗಿಲ್ಲ. ದುರದೃಷ್ಟವಶಾತ್ ಸಿಂಪಡಿಸಿದಾಗ 0.1% ಗಿಂತ ಕಡಿಮೆ ಗುರಿಪಡಿಸಿದ ಖಾಯಿಲೆ ಇರುವ ಎಲೆಗಳಭಾಗಕ್ಕೆ ತಲುಪುತ್ತದೆ, 10% ಗಿಂತ ಕಡಿಮೆಸಸ್ಯದಮೇಲೆಉಳಿಯುತ್ತದೆ ಮತ್ತು 90% ರಷ್ಟು ಪೆರಾಕ್ಸೈಡ್ ದ್ರಾವಣವು ನೆಲಕ್ಕೆ ಬೀಳುತ್ತದೆ. ಭೂಮಿಗೆ ಬೀಳುವ ಈ 90% ಸಿಂಪಡಣೆ ದ್ರಾವಣವು ರೋಗಗಳ ನಿರ್ವಹಣೆಯಲ್ಲಿ ಪಡೆದ ಪ್ರಯೋಜನಕ್ಕಿಂತ ಮಣ್ಣಿನ ಸಾವಯವ ಪದಾರ್ಥವನ್ನು ನಾಶಮಾಡುವಲ್ಲಿ ಹೆಚ್ಚು ಹಾನಿ ಮಾಡುತ್ತದೆ. ಇದರಿಂದ ಮಣ್ಣಿನ ಆರೋಗ್ಯವು ಹದಗೆಡುವುದರಿಂದ ಸಸ್ಯಗಳು ರೋಗಗಳು ಮತ್ತು ಕೀಟಗಳಿಗೆ ಕ್ರಮೇಣ ಇನ್ನಷ್ಟು ಹೆಚ್ಚು ಒಳಗಾಗುತ್ತವೆ.


ಹೈಡ್ರೋಜನ್ ಪೆರಾಕ್ಸೈಡ್ ಕಳೆ ನಾಶಕವಾಗಿ ಕೆಲಸ ಮಾಡುತ್ತದೆ ಎಂದು ಮಾರಲಾಗುತ್ತಿದೆ .

ಹೈಡ್ರೋಜನ್ ಪೆರಾಕ್ಸೈಡ್ ಅನ್ನು ಕಳೆನಾಶಕವಾಗಿ ಉಪಯೋಗಿಸಿ ಎಂದು ಪ್ರಚಾರ ನಡೆಯುತ್ತಿದೆ . ಕಳೆನಾಶಕವಾಗಿ 10% ಕಾನ್ಸನ್ಟ್ರೇಷನ್ನನ್ನು ಶಿಫಾರಸು ಮಾಡಲಾಗಿದೆ. ಇದುಪೆರಾಕ್ಸೈಡ್ನೊಂದಿಗೆ ಸಂಪರ್ಕಕ್ಕೆ ಬರುವ ಕಳೆ ಸಸ್ಯದ ಭಾಗಗಳನ್ನು ಮಾತ್ರ ಹಾನಿಗೊಳಿಸುತ್ತದೆ. ಆದರೆ ಕಳೆಗಳು ಸಾಯುವುದಿಲ್ಲ. ದುರದೃಷ್ಟವಶಾತ್ ಈ ಹೆಚ್ಚಿನ ಈ ಕಾನ್ಸನ್ಟ್ರೇಟೆಡ್ ಪೆರಾಕ್ಸೈಡ್ ಮಣ್ಣಿನ ಸಾವಯವ ಪದಾರ್ಥವನ್ನು ಕಳೆಗಳನ್ನು ಕೊಲ್ಲುವುದಕ್ಕಿಂತ ವೇಗವಾಗಿ ನಾಶಪಡಿಸುತ್ತದೆ ಮತ್ತು ಮಣ್ಣಿನ ಆರೋಗ್ಯಕ್ಕೆ ಗಂಭೀರ ಹಾನಿಯನ್ನುಂಟುಮಾಡುತ್ತದೆ ಮತ್ತು ಸಾವಯವ ಪದಾರ್ಥಗಳೊಂದಿಗೆ ನೈಟ್ರೋಜನ್ ಮತ್ತು ಪ್ರಯೋಜನಕಾರಿ ಸೂಕ್ಷ್ಮಜೀವಿಗಳನ್ನು ಕೊಲ್ಲುತ್ತದೆ. ಇದರ ಹೊರತಾಗಿ 10% ಪೆರಾಕ್ಸೈಡ್ ಅನ್ನು ಸ್ಪ್ರೇ ಆಗಿ ಬಳಸುವುದು ರೈತರ ಆರೋಗ್ಯಕ್ಕೆ ತುಂಬಾ ಅಪಾಯಕಾರಿ ಮತ್ತು ಈ ಹೆಚ್ಚಿನ ಕಾನ್ಸನ್ಟ್ರೇಷನ್ನನ್ನು ಸ್ಪ್ರೇ ಮಾಡುವ ರೈತರು ಉಸಿರಾಡಿದರೆ ಶ್ವಾಸಕೋಶಕ್ಕೆ ಹಾನಿಕಾರಕವಾಗಿದೆ. ಹಾಗಾಗಿ ಹೈಡ್ರೋಜನ್ ಪೆರಾಕ್ಸೈಡನ್ನು ಕಳೆನಾಶಕವಾಗಿ ಬಳೆಸಬಾರದು.


ಹೈಡ್ರೋಜನ್ ಪೆರಾಕ್ಸೈಡನ್ನು ರಸಗೊಬ್ಬರ ಎಂದು ಹೇಳಿಕೊಂಡು ಮಾರಲಾಗುತ್ತಿದೆ:

ರೈತರುಹೈಡ್ರೋಜನ್ ಪೆರಾಕ್ಸೈಡ್ ಗೊಬ್ಬರವಲ್ಲ ಎಂದು ತಿಳಿಯಬೇಕು. ಇದರಲ್ಲಿ ಯಾವುದೇ ಸಸ್ಯ ಪೋಷಕಾಂಶಗಳು ಇರುವುದಿಲ್ಲ. ಪೆರಾಕ್ಸೈಡ್ನ ಪ್ರವರ್ತಕರು ಇದು ಬೆಳಗಳ ಬೆಳವಣಿಗೆಯನ್ನು ವೃದ್ಧಿಗೊಳಿಸುತ್ತದೆ ಎಂದು ವಾದಿಸುತ್ತಾರೆ. ಇದು ನಿಜವಲ್ಲ. ಡ್ರೆನ್ಚಿಂಗ್ ಮಾಡಿದಾಗ ಸಾವಯವ ಪದಾರ್ಥವನ್ನು ನಾಶಪಡಿಸಿದ ನಂತರ ಉಳಿದಿರುವ ಕೆಲವು ಪೋಷಕಾಂಶಗಳು ಸಸ್ಯಗಳಿಗೆ ಲಭ್ಯವಾಗುತ್ತವೆ ಮತ್ತು ತಾತ್ಕಾಲಿಕವಾಗಿ ಸಸ್ಯದ ಬೆಳವಣಿಗೆಯನ್ನು ಹೆಚ್ಚಿಸಬಹುದು. ಆದರೆ ಇದರಿಂದ ಆಗುವ ಇತರೆ ನಷ್ಟಗಳ ಬಗ್ಗೆ ಏನು ಹೇಳುವುದಿಲ್ಲ. ಹಾಗಾಗಿ ಹೈಡ್ರೋಜನ್ ಪೆರಾಕ್ಸೈಡ್ ರಸಗೊಬ್ಬರವೆಂದು ತಿಳಿದು ಬಳಸಬಾರದು.


ಹೈಡ್ರೋಜನ್ ಪೆರಾಕ್ಸೈಡ್ ಬೇರಿನಆರೋಗ್ಯಕರಬೆಳವಣಿಗೆಯಲ್ಲಿ ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತಿದೆ:

ಪೆರಾಕ್ಸೈಡ್ನಿಂದ ಹೊರಬರುವ ಹೆಚ್ಚುವರಿ ಆಮ್ಲಜನಕದ ಅಣು ಗಾಳಿ ಮತ್ತು ಬೇರಿನ ಬೆಳವಣಿಗೆಯನ್ನು ವೃದ್ಧಿಗೊಳಿಸಲು ಸಹಾಯ ಮಾಡುತ್ತದೆ ಎಂಬುದು ವಾದ. ಆದರೆ ಅಂತಹಯಾವುದೇಪ್ರಯೋಜನಗಳು ಕಂಡುಬರುವುದಿಲ್ಲ ಮತ್ತು ಈ ವಾದವನ್ನು ಸಾಬೀತುಪಡಿಸಲು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಹಾಗಾಗಿ ಇದು ಅಸತ್ಯ.

ಪ್ರಸ್ತುತ ವೈಜ್ನಾನಿಕವಾಗಿ ಈ ಅಭ್ಯಾಸಗಳಿಂದ ಯಾವುದೇ ಲಾಭಕಂಡುಬಂದಿಲ್ಲ.


ಹಾಗಾದರೆ ರೈತರು ತಮ್ಮ ಹೊಲ ತೋಟಗಳಲ್ಲಿ ಹೈಡ್ರೋಜನ್ ಪೆರಾಕ್ಸೈಡ್ ಬಳಸಬೇಕೇ?

ಸಾಮಾಜಿಕ ಮಾಧ್ಯಮದಲ್ಲಿ ಮಾಡಲಾದ ಹೆಚ್ಚಿನ ಬರಹ ಗಳನ್ನು ವಿಜ್ಞಾನವು ಬೆಂಬಲಿಸುವುದಿಲ್ಲ.

ಪರೋಕ್ಸಿಡ್ನಿಂದ ಆಗುವ ಲಾಭಗಳು ಈಯೆಲ್ಲಾಸಮಸ್ಯೆಗಳಿಗೆ ಪರಿಹಾರ ಎನ್ನುವರೀತಿಯಲ್ಲಿ ಜಾಹಿರಾತುಗಳನ್ನು ಕೊಟ್ಟು ರೈತರ ಮನವೊಲಿಸಲು ಬಹಳ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಮತ್ತು ಇದರಿಂದ್ ಆಗುವ ಹಾನಿಗಳಬಗ್ಗೆ ಗೌಪ್ಯವನ್ನೇ ಸಾದಿಸಿಕೊಂಡಿದ್ದಾರೆ. ಹಾಗಾಗಿ ಜಾಹೀರಾತುಗಳಲ್ಲಿ - ಎಲ್ಲಾರೋಗಗಳನ್ನು ಗುಣಪಡಿಸುತ್ತದೆ, ಪೋಷಕಾಂಶಗಳನ್ನು ಪೂರೈಸುತ್ತದೆ, ಗೊಬ್ಬರವಾಗಿ ಕಾರ್ಯನಿರ್ವಹಿಸುತ್ತದೆ, ಎಲ್ಲಾ ಕೀಟಗಳನ್ನು ಕೊಲ್ಲುತ್ತದೆ - ಕಳೆಗಳನ್ನು ನಿಯಂತ್ರಿಸುತ್ತದೆ ಎಂದೆಲ್ಲ ಹೇಳಲಾಗುತ್ತದೆ. ಇವೆಲ್ಲ ಕೆಲವು ಆಯ್ದ ಪ್ರಕರಣಗಳಲ್ಲಿ ಮಾತ್ರ ನಿಜ

ಈ ಚಿಕಿತ್ಸೆಗಳನ್ನು ಮಾಮಾಡುವುದರಿಂದ ಸಂಭಾವ್ಯ ಹಾನಿಯನ್ನು ಜನಪ್ರಿಯ ಸಲಹೆಗಳು ನಿರ್ಲಕ್ಷಿಸುತ್ತವೆ.

ಪೆರಾಕ್ಸೈಡ್ ನಿಸ್ಸಂಶಯವಾಗಿ ಕೃಷಿ ಯಂತ್ರಗಳು ಮತ್ತು ಉಪಕರಣಗಳನ್ನು ಸ್ಯಾನಿಟೈಜ್ ಮಾಡಲು ವೊಂದು ಉತ್ತಮಮಾರ್ಗವಾಗಿದೆ.

ಬಹುಶಃ ಕೋಕೋಪೀಟ್ ನಂತಹ ನರ್ಸರಿ ಮಾಧ್ಯಮವನ್ನು ಸ್ಯಾನಿಟೈಜ್ ಮಾಡಲು ಬಳಸಬಹುದು.


ಆದ್ದರಿಂದ ಕೃಷಿಯಲ್ಲಿ ಹೈಡ್ರೋಜನ್ ಪೆರಾಕ್ಸೈಡ್ ಬಳಕೆಯು ಮಣ್ಣಿನ ಸಾವಯವ ಪದಾರ್ಥ ಮತ್ತು ಮಣ್ಣಿನ ಒಟ್ಟಾರೆ ಆರೋಗ್ಯಕ್ಕೆ ಅಪಾಯಕಾರಿ ಎಂದು ನಾವು ರೈತರಿಗೆ ಎಚ್ಚರಿಕೆ ನೀಡುತ್ತೇವೆ.

ನಿಮಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ನೀವು soulofkrishi.com ಅನ್ನು ಸಂಪರ್ಕಿಸಬಹುದು ಅಥವಾ ಫೋನ್ ಮೂಲಕ +919449816282 ಗೆ ಸಂಪರ್ಕಿಸಬಹುದು

ನಮಸ್ಕಾರ.

82 views0 comments

Commenti


bottom of page